ಮೂರನೇ ದಿನ : ಅಮವಾಸ್ಯೆ,ಲಕ್ಷ್ಮೀ ಪೂಜೆ
ಮೈಸೂರಿನಲ್ಲಿದ್ದು ನಾನು ಗಮನಿಸಿದಂತೆ ದೀಪಾವಳಿಯಮೂರನೇ ದಿನದಂದು ಗೌಜು-ಗದ್ದಲಗಳು ಸಾಮಾನ್ಯ.ನಾನಿರುವ ಜಾಗದ ಸುತ್ತ-ಮುತ್ತಲೂ ಇರುವಂತವರು ವ್ಯಾಪಾರೀ ಸಮುದಾಯದವರು.ಹಾಗಾಗಿ ಲಕ್ಷ್ಮೀ ಪೂಜೆಯ ಸಂಭ್ರಮ ಸ್ವಾಭಾವಿಕವಾಗಿಯೇ ಕಳೆಗಟ್ಟುತ್ತದೆ.ಆದರೆ ಊರಿನಲ್ಲಿ ಹಾಗಲ್ಲ.
ಮಾಮೂಲಿಯಾಗಿ ಕಳೆದು ಹೋಗುವ ದಿನದಂತೆಯೇ ಇಂದೂ ಸಹ ಯಾವುದೇ ಗೌಜಿಲ್ಲ.ಹಬ್ಬದ ಸಡಗರವೂ ಎದ್ದು ಕಾಣುವುದಿಲ್ಲ ; ವರ್ತಕರ ಮನೆಗಳನ್ನು ಹೊರತುಪಡಿಸಿ. ನಮ್ಮ ಮನೆಯ ಸುತ್ತಲೂ ಯಾವುದೇ ಅಂಗಡಿಯಿಲ್ಲ.ಆದ್ದರಿಂದ ಹಬ್ಬದ ಬಿಸಿ ತಟ್ಟುತ್ತಿರಲಿಲ್ಲ.ಆದರೂ 'ದಿನದ ವಿಶೇಷ'ಎನ್ನುವಂತಹ ಸಂದರ್ಭ ಒಂದಿತ್ತು ...
ಅಪ್ಪ ಯಾವಾಗಲಾದರೊಮ್ಮೆ "ಇದ್ನ ತೆಗ್ಡಿಡಿ ಅಪ್ಪಯ್ಯ" ಎಂದು ಕೊಡುತ್ತಿದ್ದ ದುಡ್ಡು , ಊಟದ ಮನೆಗೆ ಹೋಗಿದ್ದಾಗ ಕೊಡುತ್ತಿದ್ದ ದಕ್ಷಿಣೆ ಇವುಗಳನ್ನ ಸೇರಿಸುತ್ತಿದ್ದುದು ನಾನು ಹಣ ಕೂಡಿಡುತ್ತಿದ್ದ ಡಬ್ಬಿಗೆ.ಇದರಲ್ಲೂ ನನಗೆ ತಂಗಿಗೆ ಯಾವಾಗಲೂ ಶೀತಲ ಸಮರವೇ ನಡೆಯುತ್ತಿತ್ತು.ಅವಳಿಗೋ ಹೋದಲ್ಲೆಲ್ಲಾ "ಪುಟ್ಟಿ ಬಂದಳೆ ಕಣ್ರೋ" ಎಂದು ಹೇಳಿ ಅರಿಶಿಣ-ಕುಂಕುಮದೊಂದಿಗೆ ಕಡೇ ಪಕ್ಷ ಒಂದೈದು ರೂಪಾಯಿಯಾದರೂ ಕೊಡುತ್ತಿದ್ದರು.ಆದರೆ ನನಗೆ ಯಾರು ಕೊಡುತ್ತಾರೆ.? ಆಗೆಲ್ಲ ಬೇಸರವಾಗುತ್ತಿತ್ತು.ಅವಳಿಗೆ ಸಿಕ್ಕಿದಕ್ಕೆ ಪ್ರತಿಯಾಗಿ ನಾನು ಯಾವ ಮೂಲದಿಂದ ಹಣ ಪಡೆಯುವುದು ಎಂದು ಯೋಚಿಸುತ್ತಿದ್ದೆ.ಆಗೆಲ್ಲ ನನ್ನ ಕಣ್ಣಿಗೆ ಬೀಳುತ್ತಿದ್ದುದು ಅಮ್ಮ.ಅಮ್ಮನ ಬಳಿ ಕಾಡಿ ಬೇಡಿ ತಂಗಿಗೆ ಸಿಕ್ಕಿದ್ದಕ್ಕಿಂತ ಒಂದು ರೂಪಾಯಿಯಾದರೂ ಹೆಚ್ಚಿಗೆ ಪಡೆದು ಡಬ್ಬಿಗೆ ಹಾಕಿಡುತ್ತಿದ್ದೆ.ಒಂದು ವೇಳೆ ನಾನು ಕೇಳಿದಾಗ ಕೊಡದಿದ್ದರೆ ಒಪ್ಪಂದ ಮಾಡಿಕೊಂಡುಬಿಡುತ್ತಿದ್ದೆ ; ಅಮ್ಮನಿಗೆ ಸಿಕ್ಕಬಹುದಾದ ದುಡ್ಡೆಲ್ಲವೂ ನನ್ನ ಡಬ್ಬಿಗೆ ಎಂದು.ಅಮ್ಮನೂ ಒಪ್ಪುತ್ತಿದ್ದರು.ಇದೆಲ್ಲಾ ಆದಷ್ಟು ರಹಸ್ಯದಿಂದಲೇ ನಡೆಯಬೇಕಾಗಿದ್ದ ಕಾರ್ಯ.ಅಕಸ್ಮಾತ್ ರಹಸ್ಯ ಬಯಲಾದರೆ ತಂಗಿ ಅಪ್ಪನ ಬಳಿ ಹೋಗಿ ಒಪ್ಪಂದ ಮಾಡಿಕೊಂಡುಬಿಡುತ್ತಿದ್ದಳು. ಅದಕ್ಕೇ 'ಶೀತಲ ಸಮರ'ವೆಂದದ್ದು.
ಯಾರ ಡಬ್ಬ ಹೆಚ್ಚು ಭಾರವಿರುತ್ತಿತ್ತೋ ಅವರ ಕರಡಿಗೆಯಲ್ಲಿ ಹೆಚ್ಚು ದುಡ್ಡಿದೆ ಎಂಬ ಭಾವನೆ ನಮ್ಮದು.ನೋಟುಗಳು ನಮ್ಮ ಲೆಕ್ಕದಲ್ಲಿ ನಗಣ್ಯ ; ಚಿಲ್ಲರೆಗಳಿಗೇ ಬೆಲೆ.ಒಂದು ಲೆಕ್ಕದಲ್ಲಿ ಅಪ್ಪ-ಅಮ್ಮನಿಗೆ ಇದು ಸಮಾಧಾನಕರವಾಗಿಯೂ ಇತ್ತು.ನೋಟುಗಳ ತೂಕದ ಆಧಾರದ ಮೇಲೆ ಗಲಾಟೆ ಮಾಡಿಕೊಳ್ಳುವುದಕ್ಕಿಂತ ಚಿಲ್ಲರೆಯ ತೂಕವೇ ಉತ್ತಮ ಎಂದು ಭಾವಿಸಿದ್ದರೋ ಏನೋ...
ಹೀಗೆ ಪೈಪೋಟಿಯಿಂದ ಕೂಡಿಟ್ಟ ಹಣದ ಡಬ್ಬಕ್ಕೆ ಪೂಜೆ ಮಾಡುವ ದಿನ ಇದು.ಇಡಿಯ ವರ್ಷದಲ್ಲಿ ಡಬ್ಬ ತನ್ನ ಜಾಗವನ್ನು ಬದಲಿಸುತ್ತಿದ್ದುದು ಈ ದಿನ ಮಾತ್ರ.ಪೂಜೆ ಮುಗಿದ ನಂತರ ಮರಳಿ ಸ್ವಸ್ಥಾನವನ್ನು ಸೇರಿದರೆ ಮತ್ತೆ ತನ್ನ ಜಾಗದಿಂದ ಕದಲುತ್ತಿದ್ದುದು ಮುಂದಿನ ವರ್ಷವೇ...
ಮೈಸೂರಿನಲ್ಲಿದ್ದು ನಾನು ಗಮನಿಸಿದಂತೆ ದೀಪಾವಳಿಯಮೂರನೇ ದಿನದಂದು ಗೌಜು-ಗದ್ದಲಗಳು ಸಾಮಾನ್ಯ.ನಾನಿರುವ ಜಾಗದ ಸುತ್ತ-ಮುತ್ತಲೂ ಇರುವಂತವರು ವ್ಯಾಪಾರೀ ಸಮುದಾಯದವರು.ಹಾಗಾಗಿ ಲಕ್ಷ್ಮೀ ಪೂಜೆಯ ಸಂಭ್ರಮ ಸ್ವಾಭಾವಿಕವಾಗಿಯೇ ಕಳೆಗಟ್ಟುತ್ತದೆ.ಆದರೆ ಊರಿನಲ್ಲಿ ಹಾಗಲ್ಲ.
ಮಾಮೂಲಿಯಾಗಿ ಕಳೆದು ಹೋಗುವ ದಿನದಂತೆಯೇ ಇಂದೂ ಸಹ ಯಾವುದೇ ಗೌಜಿಲ್ಲ.ಹಬ್ಬದ ಸಡಗರವೂ ಎದ್ದು ಕಾಣುವುದಿಲ್ಲ ; ವರ್ತಕರ ಮನೆಗಳನ್ನು ಹೊರತುಪಡಿಸಿ. ನಮ್ಮ ಮನೆಯ ಸುತ್ತಲೂ ಯಾವುದೇ ಅಂಗಡಿಯಿಲ್ಲ.ಆದ್ದರಿಂದ ಹಬ್ಬದ ಬಿಸಿ ತಟ್ಟುತ್ತಿರಲಿಲ್ಲ.ಆದರೂ 'ದಿನದ ವಿಶೇಷ'ಎನ್ನುವಂತಹ ಸಂದರ್ಭ ಒಂದಿತ್ತು ...
ಅಪ್ಪ ಯಾವಾಗಲಾದರೊಮ್ಮೆ "ಇದ್ನ ತೆಗ್ಡಿಡಿ ಅಪ್ಪಯ್ಯ" ಎಂದು ಕೊಡುತ್ತಿದ್ದ ದುಡ್ಡು , ಊಟದ ಮನೆಗೆ ಹೋಗಿದ್ದಾಗ ಕೊಡುತ್ತಿದ್ದ ದಕ್ಷಿಣೆ ಇವುಗಳನ್ನ ಸೇರಿಸುತ್ತಿದ್ದುದು ನಾನು ಹಣ ಕೂಡಿಡುತ್ತಿದ್ದ ಡಬ್ಬಿಗೆ.ಇದರಲ್ಲೂ ನನಗೆ ತಂಗಿಗೆ ಯಾವಾಗಲೂ ಶೀತಲ ಸಮರವೇ ನಡೆಯುತ್ತಿತ್ತು.ಅವಳಿಗೋ ಹೋದಲ್ಲೆಲ್ಲಾ "ಪುಟ್ಟಿ ಬಂದಳೆ ಕಣ್ರೋ" ಎಂದು ಹೇಳಿ ಅರಿಶಿಣ-ಕುಂಕುಮದೊಂದಿಗೆ ಕಡೇ ಪಕ್ಷ ಒಂದೈದು ರೂಪಾಯಿಯಾದರೂ ಕೊಡುತ್ತಿದ್ದರು.ಆದರೆ ನನಗೆ ಯಾರು ಕೊಡುತ್ತಾರೆ.? ಆಗೆಲ್ಲ ಬೇಸರವಾಗುತ್ತಿತ್ತು.ಅವಳಿಗೆ ಸಿಕ್ಕಿದಕ್ಕೆ ಪ್ರತಿಯಾಗಿ ನಾನು ಯಾವ ಮೂಲದಿಂದ ಹಣ ಪಡೆಯುವುದು ಎಂದು ಯೋಚಿಸುತ್ತಿದ್ದೆ.ಆಗೆಲ್ಲ ನನ್ನ ಕಣ್ಣಿಗೆ ಬೀಳುತ್ತಿದ್ದುದು ಅಮ್ಮ.ಅಮ್ಮನ ಬಳಿ ಕಾಡಿ ಬೇಡಿ ತಂಗಿಗೆ ಸಿಕ್ಕಿದ್ದಕ್ಕಿಂತ ಒಂದು ರೂಪಾಯಿಯಾದರೂ ಹೆಚ್ಚಿಗೆ ಪಡೆದು ಡಬ್ಬಿಗೆ ಹಾಕಿಡುತ್ತಿದ್ದೆ.ಒಂದು ವೇಳೆ ನಾನು ಕೇಳಿದಾಗ ಕೊಡದಿದ್ದರೆ ಒಪ್ಪಂದ ಮಾಡಿಕೊಂಡುಬಿಡುತ್ತಿದ್ದೆ ; ಅಮ್ಮನಿಗೆ ಸಿಕ್ಕಬಹುದಾದ ದುಡ್ಡೆಲ್ಲವೂ ನನ್ನ ಡಬ್ಬಿಗೆ ಎಂದು.ಅಮ್ಮನೂ ಒಪ್ಪುತ್ತಿದ್ದರು.ಇದೆಲ್ಲಾ ಆದಷ್ಟು ರಹಸ್ಯದಿಂದಲೇ ನಡೆಯಬೇಕಾಗಿದ್ದ ಕಾರ್ಯ.ಅಕಸ್ಮಾತ್ ರಹಸ್ಯ ಬಯಲಾದರೆ ತಂಗಿ ಅಪ್ಪನ ಬಳಿ ಹೋಗಿ ಒಪ್ಪಂದ ಮಾಡಿಕೊಂಡುಬಿಡುತ್ತಿದ್ದಳು. ಅದಕ್ಕೇ 'ಶೀತಲ ಸಮರ'ವೆಂದದ್ದು.
ಯಾರ ಡಬ್ಬ ಹೆಚ್ಚು ಭಾರವಿರುತ್ತಿತ್ತೋ ಅವರ ಕರಡಿಗೆಯಲ್ಲಿ ಹೆಚ್ಚು ದುಡ್ಡಿದೆ ಎಂಬ ಭಾವನೆ ನಮ್ಮದು.ನೋಟುಗಳು ನಮ್ಮ ಲೆಕ್ಕದಲ್ಲಿ ನಗಣ್ಯ ; ಚಿಲ್ಲರೆಗಳಿಗೇ ಬೆಲೆ.ಒಂದು ಲೆಕ್ಕದಲ್ಲಿ ಅಪ್ಪ-ಅಮ್ಮನಿಗೆ ಇದು ಸಮಾಧಾನಕರವಾಗಿಯೂ ಇತ್ತು.ನೋಟುಗಳ ತೂಕದ ಆಧಾರದ ಮೇಲೆ ಗಲಾಟೆ ಮಾಡಿಕೊಳ್ಳುವುದಕ್ಕಿಂತ ಚಿಲ್ಲರೆಯ ತೂಕವೇ ಉತ್ತಮ ಎಂದು ಭಾವಿಸಿದ್ದರೋ ಏನೋ...
ಹೀಗೆ ಪೈಪೋಟಿಯಿಂದ ಕೂಡಿಟ್ಟ ಹಣದ ಡಬ್ಬಕ್ಕೆ ಪೂಜೆ ಮಾಡುವ ದಿನ ಇದು.ಇಡಿಯ ವರ್ಷದಲ್ಲಿ ಡಬ್ಬ ತನ್ನ ಜಾಗವನ್ನು ಬದಲಿಸುತ್ತಿದ್ದುದು ಈ ದಿನ ಮಾತ್ರ.ಪೂಜೆ ಮುಗಿದ ನಂತರ ಮರಳಿ ಸ್ವಸ್ಥಾನವನ್ನು ಸೇರಿದರೆ ಮತ್ತೆ ತನ್ನ ಜಾಗದಿಂದ ಕದಲುತ್ತಿದ್ದುದು ಮುಂದಿನ ವರ್ಷವೇ...
ಚಿಕ್ಕದಾದರೂ ಚೊಕ್ಕದಾಗಿ ತುಂಬಾ ಚೆಂದವಾಗಿ ಮೂಡಿಬಂದ ಬರಹ..... ಮುಂದುವರಿಸು.
ReplyDeleteಧನ್ಯವಾದಗಳು... :)
Deleteಬಾಲ್ಯದ ನೆನಪುಗಳು ಯಾವಾಗಲೂ ಚಂದ. ನನ್ನ ಹಾಗೂ ತಂಗಿಯ ದುಡ್ಡಿನ ಡಬ್ಬಗಳ ನೆನಪಾಯಿತು. ಧನ್ಯವಾದ :)
ReplyDeleteಪ್ರೋತ್ಸಾಹ ಹೀಗೆ ನಿರಂತರವಾಗಿರಲಿ ಅಕ್ಕಾ....
Deleteಧನ್ಯವಾದಗಳು
adduri... yen guru idella
ReplyDeleteಹಾಗೇ...
Delete